Friday, June 3, 2011

ಯಾರು ತಿಳಿಯರು ನಿನ್ನ Yaaru thiliyaru Ninna


ಹಾಡು: ಯಾರು ತಿಳಿಯರು ನಿನ್ನ  
ಚಿತ್ರ: ಬಭ್ರುವಾಹನ 
ಸಾಹಿತ್ಯ: ಹುಣಸೂರು ಕೃಷ್ಣಮುರ್ತಿ


ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ
ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ
ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡಿ
ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಊಡು ಬಾಣಗಳ ಮಾಡುವೆ ಮಾನಭಂಗ
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಅಂತಕನಿಗೆ ಅಂತಕನು ಈ ಬಭ್ರುವಾಹನ

16 comments:

  1. small corrections,
    ಹೂಡು ಬಾಣಗಳ
    ಹಂತಕನ ಆಹ್ವಾನ
    ಹಂತಕನಿಗೆ ಹಂತಕನು

    ReplyDelete
    Replies
    1. ಅಂತಕನ ಆಹ್ವಾನ ಮತ್ತು ಅಂತಕನಿಗೇ ಅಂತಕನು ಎಂಬುದೇ ಸರಿಯಾದ ಪ್ರಯೋಗಗಳು.

      ಅಂತಕ ಎಂದರೆ ಯಮ ಎಂಬರ್ಥವಿದೆ.

      Delete
  2. Suuuuuuuper.. will we be able to come across this kind of powerful dialogues with an actor who can deliver them to perfection. A gem for ever...

    ReplyDelete
  3. Suuuuuuuper.. will we be able to come across this kind of powerful dialogues with an actor who can deliver them to perfection. A gem for ever...

    ReplyDelete
  4. still the most energizing "with" the Dr.Raj's voice. Awesome

    ReplyDelete
  5. One of the best lyrics written by Hunsur krishamurthy sir..

    ReplyDelete
  6. Wonderful dialogue for Babruvahana and Arjuna.

    ReplyDelete
  7. Sir. He is the god thank for this dailogues evn i am trying to act .but i am sure no one can match him..

    ReplyDelete